![ಗಣೇಶೋತ್ಸವವನ್ನು ಆದರ್ಶವಾಗಿ ಆಚರಿಸಿ! ಗಣೇಶೋತ್ಸವವನ್ನು ಆದರ್ಶವಾಗಿ ಆಚರಿಸಿ!](https://www.exevor.com/assets/uploads/files/celebrate-chowthi1661331564_25141ae2c9907543e1c7.webp)
೧. ಶ್ರೀ ಗಣೇಶಚತುರ್ಥಿಗೆ ಪೂಜಿಸಬೇಕಾದ ಮೂರ್ತಿ ಹೇಗಿರಬೇಕು?.
????ಆಧ್ಯಾತ್ಮಶಾಸ್ತ್ರಕ್ಕನುಸಾರವಾಗಿ ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣು ಅಥವಾ ಆವೆಮಣ್ಣಿನಿಂದ ತಯಾರಿಸಿರಬೇಕು.ಗೋಮಯ ಗಣೇಶ ಒಳ್ಳೆಯದು. ಇತರ ವಸ್ತುಗಳಾದ , ಉದಾ-ಪ್ಲಾಸ್ಟರ್ ಆಫ್ ಪ್ಯಾರಿಸ್ , ಕಾಗದದ ಮುದ್ದೆ , ಫೈಬರ್ , ಮುಂತಾದವುಗಳಿಂದ ತಯಾರಿಸಿರುವ ಮೂರ್ತಿಯನ್ನು ತರಬಾರದು.
🕉ಮೂರ್ತಿಯು ಮಣೆಯ ಮೇಲೆ ಕುಳಿತಿರುವ , ಆದಷ್ಟು ಎಡ ಸೊಂಡಿಲಿರುವ ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಿದಿರುವಂತಹದ್ದಾಗಿರಬೇಕು.
೨. ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಸ್ತುಗಳ ಮಹತ್ವ!
🕉ದೂರ್ವೆ ಮತ್ತು ಕೆಂಪು ಹೂವುಗಳನ್ನು ಅರ್ಪಿಸಬೇಕು: ಗಣೇಶನ ವರ್ಣ ಕೆಂಪು. ಗಣೇಶನ ಪೂಜೆಯಲ್ಲಿ ಕೆಂಪು ಬಟ್ಟೆ, ಕೆಂಪು ಹೂವು , ರಕ್ತಚಂದನವನ್ನು ಉಪಯೋಗಿಸುತ್ತಾರೆ. ಅವುಗಳ ಕೆಂಪು ಬಣ್ಣದಿಂದ ಮೂರ್ತಿಯ ಕಡೆಗೆ ವಾಯುಮಂಡಲದಲ್ಲಿನ ಗಣೇಶ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುತ್ತದೆ.
🕉ದೂರ್ವೆ(ಗರಿಕೆ) ಅರ್ಪಿಸುವ ಪದ್ದತಿ: ದೂರ್ವೆಗಳನ್ನು ವಿಷಮ ಸಂಖ್ಯೆಯಲ್ಲಿ (೫,೭,೨೧ ಇತ್ಯಾದಿ) ಅರ್ಪಿಸಬೇಕು. ಎಳೆಯ ದೂರ್ವೆಯ ಗೊಂಚಲುಗಳನ್ನು ನೀರಿನಲ್ಲಿ ಮುಳುಗಿಸಿ ಅರ್ಪಿಸುವಾಗ ಶ್ರೀ ಗಣೇಶನ ಮುಖವನ್ನು ಬಿಟ್ಟು ಸಂಪೂರ್ಣ ಮೂರ್ತಿಯನ್ನು ದೂರ್ವೆಗಳಿಂದ ಮುಚ್ಚಬೇಕು.
🕉ಬನ್ನಿ ಮತ್ತು ಮಂದಾರದ ಎಲೆಗಳನ್ನು ಅರ್ಪಿಸಬೇಕು:- ಬನ್ನಿಯ ಮರದಲ್ಲಿ ಅಗ್ನಿಯ ವಾಸವಿರುತ್ತದೆ. ಪಾಂಡವರು ತಮ್ಮ ಶಸ್ತ್ರಗಳು ತೇಜಸ್ವಿಯಾಗಿರಬೇಕೆಂದು ಅವುಗಳನ್ನು ಬನ್ನಿ ಮರದ ಪೊಟರೆಯಲ್ಲಿಟ್ಟಿದ್ದರು. ಮಂದಾರವು ಔಷಧಿ ವನಸ್ಪತಿಯಾಗಿದೆ.
೩. ಗಣೇಶೋತ್ಸವದಲ್ಲಿ ಶ್ರೀ ಗಣೇಶನ ನಾಮಜಪ ಮಾಡಿರಿ:-
ಗಣೇಶೋತ್ಸವದ ಸಮಯದಲ್ಲಿ , ಅಂದರೆ ಶ್ರೀ ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ೧೦೦೦ ಪಟ್ಟು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಕಾರ್ಯನಿರತವಿರುವ ಗಣೇಶತತ್ವದ ಲಾಭವನ್ನು ಪಡೆದುಕೊಳ್ಳಲು "ಓಂ ಗಂ ಗಣಪತಯೇ ನಮಃ" ಈ ನಾಮಜಪವನ್ನು ಸತತವಾಗಿ ಮಾಡಿರಿ.
೪. ಶ್ರೀ ಗಣೇಶನ ಉಪಾಸನೆಯಲ್ಲಿ ಮಾಡಬೇಕಾದ ಕೃತಿಗಳು:-
🕉ಗಣಪತಿಗೆ ಯಾವ ಬೆರಳಿನಿಂದ ಗಂಧ ಹಚ್ಚಬೇಕು??-- ಅನಾಮಿಕಾ (ಕಿರುಬೆರಳಿನ ಪಕ್ಕದ ಬೆರಳು)
🕉ಯಾವ ಹೂವುಗಳನ್ನು ಅರ್ಪಿಸಬೇಕು??-- ಕೆಂಪು ದಾಸವಾಳ / ಕೆಂಪು ಬಣ್ಣದ ಹೂವು.
🕉ಹೂವುಗಳನ್ನು ಹೇಗೆ ಅರ್ಪಿಸಬೇಕು?? -- ತೊಟ್ಟು ದೇವರ ಕಡೆಗೆ ಮಾಡಿ.
🕉ಯಾವ ಊದುಬತ್ತಿಯಿಂದ ಬೆಳಗಬೇಕು??-- ಚಂದನ/ ಕೇದಗೆ/ ಚಮೇಲಿ.ಗೋಮಯ ದೂಪ ಬತ್ತಿ, ರಾಸಾಯನಿಕ ರಹಿತ ಹಾಗೂ ಆರೋಗ್ಯಕರ.
🕉ಗಣಪತಿಗೆ ಎಷ್ಟು ಪ್ರದಕ್ಷಣೆಗಳನ್ನು ಹಾಕಬೇಕು??-- ಎಂಟು ಮತ್ತು ಎಂಟರ ಗುಣಾಕಾರದಲ್ಲಿ.
೫. ಧರ್ಮಶಾಸ್ತ್ರಕ್ಕನುಸಾರ ಹಾಗೂ ಸಾತ್ವಿಕವಾಗಿ ಗಣೇಶೋತ್ಸವ ಆಚರಿಸಿ:-
🕉ಥರ್ಮಾಕೋಲನ್ನು ಬಳಸಬೇಡಿ: ಶ್ರೀ ಗಣೇಶನ ಮೂರ್ತಿಗಾಗಿ ಮಂಟಪ ತಯಾರಿಸಲು 'ಥರ್ಮಾಕೋಲನ್ನು' ಬಳಸಬೇಡಿರಿ, ಥರ್ಮಾಕೋಲ್ ವಿಘಟನೆಯಾಗುವುದಿಲ್ಲ. ಅದರ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ, ಹಾಗೆಯೇ ಥರ್ಮಾಕೋಲ್ ರಾಸಾಯನಿಕ ಪ್ರಕ್ರಿಯೆಯಿಂದ ನಿರ್ಮಾಣವಾಗಿದ್ದರಿಂದ ಅದು ರಜ-ತಮಯುಕ್ತವಾಗಿದೆ. ಇಂತಹ ರಜ-ತಮಯುಕ್ತ ವಸ್ತುವು ಸಾತ್ವಿಕತೆಯನ್ನು ಗ್ರಹಿಸಲಾರದು, ತದ್ವಿರುದ್ಧ ಅದು ರಜ-ತಮ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ.
🕉ಬಾಳೆದಿಂಡಿನಿಂದ ತಯಾರಿಸಿದ ಮಂಟಪ: ಮಂಟಪಕ್ಕಾಗಿ ಬಾಳೆಯ ದಿಂಡನ್ನು ಉಪಯೋಗಿಸಬೇಕು, ಬಾಳೆಯ ದಿಂಡಿನಿಂದ ತಯಾರಿಸಿದ ಮಂಟಪವು ಹೆಚ್ಚು ಸಾತ್ವಿಕವಾಗಿರುತ್ತದೆ..
೬. ಆದರ್ಶ ಗಣೇಶೋತ್ಸವದ ಮೂಲಕ ಶ್ರೀ ಗಣೇಶನ ಕೃಪೆ ಸಂಪಾದಿಸಿ:-
🕉 ಉತ್ಸವ ಸ್ಥಳದಲ್ಲಿ ಸ್ತೋತ್ರ,ರಾಷ್ಟ್ರ-ಧರ್ಮ ವಿಷಯಗಳ ಪ್ರವಚನಗಳು,ಭಕ್ತಿಗೀತೆಗಳನ್ನು ಹಾಕಿರಿ.
🕉ಉತ್ಸವದ ಸ್ಥಳದಲ್ಲಿ ಚಿತ್ರಗೀತೆಗಳು , ರೆಕಾರ್ಡ್ ಡ್ಯಾನ್ಸ್ , ಜೂಜಾಟ, ಅಸಭ್ಯ ಕುಣಿತ, ಮದ್ಯಪಾನ, ಗುಟಖಾಗಳ ಜಾಹೀರಾತುಗಳನ್ನು ಹಾಕುವುದು ಇತ್ಯಾದಿಗಳನ್ನು ಮಾಡದಿರಿ.
🕉 ಸಾಲಿನಲ್ಲಿ ನಿಂತ ಭಕ್ತರು ಹರಟೆ ಹೊಡೆಯುವ ಬದಲು ನಾಮಜಪ ಮಾಡುವಂತೆ ಪ್ರೋತ್ಸಾಹಿಸಿರಿ!!
೭. ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಆದರ್ಶವಾಗಿರಲಿ:-
🕉ಭಾರತೀಯ ಉಡುಪು ಧರಿಸಿ.
🕉ಪಟಾಕಿಗಳಿಗೆ ಅಧಿಕ ಖರ್ಚು ಮಾಡಬೇಡಿ.
🕉ಮೆರವಣಿಗೆಯನ್ನು ರಸ್ತೆಯ ಒಂದು ಬದಿಯಲ್ಲಿ ಸಾಲಾಗಿ ಕೊಂಡೊಯ್ಯಿರಿ.
🕉ಮೆರವಣಿಗೆಯಲ್ಲಿ ಭಜನೆ ಹಾಡಿರಿ, ಶ್ರೀ ಗಣೇಶನ ನಾಮಜಪ ಮಾಡಿ ಮತ್ತು ಅಥರ್ವಶೀರ್ಷವನ್ನು ಪಠಿಸಿ.
🕉ಮೆರವಣಿಗೆಯಲ್ಲಿ ಗುಲಾಲು ಎರಚುವುದು, ಮದ್ಯಪಾನ, ಅಸಭ್ಯ ನೃತ್ಯ ಅಥವಾ ಮಹಿಳೆಯರಿಗೆ ಚುಡಾಯಿಸುವ ಕೃತ್ಯಗಳಾಗದಂತೆ ನೋಡಿಕೊಳ್ಳಿ.
🕉ಬ್ಯಾಂಡ್ ನಂತಹ ವಾದ್ಯಗಳಿಗಿಂತ ತಾಳ, ಮೃದಂಗ, ತಮ್ಮಟೆಯಂತಹ ವಾದ್ಯ ಬಾರಿಸಿ.
🕉ಮೆರವಣಿಗೆಯನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿ ರಾತ್ರಿ ೧೦ರೊಳಗೆ ಮುಗಿಸಿ.
೮.ಶ್ರೀ ಗಣೇಶನ ಅವಮಾನ ತಡೆಯುವುದೂ ಗಣೇಶಭಕ್ತಿಯೇ ಆಗಿದೆ:-
🕉 ಶ್ರೀ ಗಣೇಶನ ಚಿತ್ರವುಳ್ಳ ಹೊದಿಕೆಗಳಿರುವ ಉತ್ಪಾದನೆಗಳನ್ನು (ಉದಾ.- ಸಿಹಿತಿಂಡಿ, ಊದುಬತ್ತಿ ಇತ್ಯಾದಿ) ಖರೀದಿ ಮಾಡಬೇಡಿ.
🕉ಗಣೇಶಮೂರ್ತಿಗಳನ್ನು ಚಿತ್ರ ವಿಚಿತ್ರ ರೂಪಗಳಲ್ಲಿ ತಯಾರಿಸಿ ಶ್ರೀ ಗಣೇಶನ ವಿಡಂಬನೆಗಳನ್ನು ಮಾಡುವವರನ್ನು ನಿಯಂತ್ರಿಸಿ .
🕉ಶ್ರೀ ಗಣೇಶನ ವಿಡಂಬನೆ ಮಾಡುವ ಪ್ರಸಾರ ಮಾಧ್ಯಮಗಳನ್ನು ಕಾನೂನುರೀತ್ಯಾ ಬಹಿಷ್ಕರಿಸಿ.
🕉ಆದರ್ಶ ಗಣೇಶೋತ್ಸವ ಆಚರಿಸಲು ಗಣೇಶೋತ್ಸವ ಮಂಡಳಿಗಳಿಗೆ ಸಹಕರಿಸಿ.
🕉️ ಗಣೇಶೋತ್ಸವ ಸಮಿತಿಗಳು ಶಿಕ್ಷಣ ,ಆರೋಗ್ಯ ,ಸಂಸ್ಕಾರ, ಸ್ವಾವಲಂಬನೆ ಮೊದಲಾದ ಸಮಾಜಮುಖಿ ಕಾರ್ಯಗಳನ್ನು ವರ್ಷಪೂರ್ತಿ ನಡೆಸುವಂತೆ ಆಗಲಿ.
🕉ಧರ್ಮೋ ರಕ್ಷತಿ ರಕ್ಷಿತಃ🕉
Leave a reply
Latest Posts
10 Best Malayalam Movies You Must Watch in 2024
The Malayalam film industry is renowned for producing inventive and varied films, and 2024 is already looking to be no different. With so many different films slated for release—from high-profile blockbusters to indie productions—there's something for everyone to enjoy. Here we have listed the 10 best Malayalam movies that give you goosebumps and make you cry. Most of the Malayalam movies are written based on true stories and events.
Trend: Exevor launched new tool for domain availability check
We launched a tool for search domain name for check availability. This tool is little bit straight and quick.
Kiwifruit
Kiwifruit, also known simply as kiwi, is a small, fuzzy fruit with a brown, hairy skin and bright green flesh. It is known for its unique, sweet-tart flavor and vibrant green color. The scientific name for the most common variety is Actinidia deliciosa. Kiwifruit is native to China and was originally called Chinese gooseberry, but it was later renamed kiwifruit or kiwi in reference to the New Zealand national bird, the kiwi, which has a similar brown, fuzzy exterior.
Golden Temple Kushalnagar, Coorg's
The Golden Temple in Kushalnagar, Coorg, is officially known as the Namdroling Monastery. It is a significant Tibetan Buddhist monastery and is one of the largest teaching centers of the Nyingma lineage of Tibetan Buddhism outside Tibet.