Best quotes and wishes for WhatsApp in kannada

Best quotes and wishes for WhatsApp in kannada

Best quotes and wishes for WhatsApp and other social media



ನೀನು ಯಶಸ್ಸಿನತ್ತ ಸಾಗಿದಾಗ, ನಿನ್ನ ಸ್ನೇಹಿತರಿಗೆ ನೀನ್ಯಾರೆಂದು ಗೊತ್ತಾಗುತ್ತದೆ. ನೀನು ಕಷ್ಟದಲ್ಲಿದ್ದಾಗ ನಿನಗೆ ನಿನ್ನ  ಸ್ನೇಹಿತರ್ಯಾರೆಂದು ಗೊತ್ತಾಗುತ್ತದೆ.
ಶುಭ ಮುಂಜಾನೆ
_________________________________________

ನೀನೆಷ್ಟು ಶ್ರೀಮಂತ ಅಂತಾ ಗೊತ್ತಾಗಬೇಕ್ಕೆಂದರೆ…ನಿನ್ನಲ್ಲಿರುವ ದುಡ್ಡನ್ನು ಎಣಿಸುತ್ತಾ ಕೂರಬೇಡ. ಒಂದು ಹನಿ ಕಣ್ಣಿರು ಹಾಕಿ ನೋಡು ಅದನ್ನೊರೆಸಲು ನಿನ್ನ ಸುತ್ತ ಎಷ್ಟು ಸೇರಿರುತ್ತಾರೋ ಎಣಿಸಿ ನೋಡು…ಮಂದಿ
ಶುಭ ದಿನ ಶುಭ ಮುಂಜಾನೆ
_________________________________________

ಶುದ್ದ ಹಾಲಿನಲ್ಲಿ ನೊರೆ ಜಾಸ್ತಿ, ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ, ಇದನ್ನು ಅರಿತರೆ ಬಾಳಿನಲ್ಲಿ ಸವಿ ಜಾಸ್ತಿ..
ಶುಭ ದಿನ ಶುಭ ಮುಂಜಾನೆ
_________________________________________

ಮನದ ಕತ್ತಲ ಹೋಡಿಸುತ
ಒಳಗೆ ದೀಪವ ಬೆಳಗಿಸುತ
ಸಂತಸದಿ, ಸಂಭ್ರಮದಲಿ ಆಚರಿಸುತ
ಸುರಕ್ಷೆಗೆ ಪ್ರಾಧಾನ್ಯ ನೀಡುತ
ಎಲ್ಲರಿಗೂ ದೀಪಾವಳಿಯ ಶುಭವ ಕೋರುತ
ಆಚರಿಸುವ ದೀಪಾವಳಿಯ ಹರ್ಶಿಸುತ
ದೀಪಾವಳಿಯ ಶುಭಾಶಯಗಳೊಂದಿಗೆ
_________________________________________

ಜೀವನ ಎಲ್ಲರಿಗೂ ಸಿಗಲೇಬೇಕೆನ್ನುವುದು ಅವಶ್ಯಕವಲ್ಲ, ಸ್ನೇಹ ಎಲ್ಲರಿಗೂ ಸಿಗಬೇಕೆನ್ನುವುದು ಅವಶ್ಯಕವಲ್ಲ ಕೆಲವೊಂದು ವ್ಯಕ್ತಿಗಳು ನಮಗೆ ತುಂಬಾ ಕಾಡುತ್ತಿದ್ದರೂ, ನಾವು ಅವರಿಗೆ ನೆನಪಿಗೆ ಬರಬೇಕೆನ್ನುವುದು ಅವಶ್ಯಕವಲ್ಲ
ಶುಭೋದಯ ಶುಭ ದಿನ
_________________________________________

ಒಂದು ನಿಮಿಷದಲ್ಲಿ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಯನ್ನು ತರಲಿಕ್ಕೆ ಸಾಧ್ಯವಿಲ್ಲ. ಆದರೆ ಪ್ರತಿ ನಿಮಿಷವನ್ನು ಸದ್ಬಳಕೆಯನ್ನು ಮಾಡಿಕೊಂಡದ್ದೇ ಆದಲ್ಲಿ ಅಸಾಧಾರಣ ಪರಿವರ್ತನೆ ನಿಮ್ಮಲ್ಲಿ ಆಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ. ಸಮಯವನ್ನು ಹಾಳು ಮಾಡಬೇಡಿ. 
ಶುಭೋದಯ
_________________________________________

ಕಳೆದುಹೋದ ಜೀವನವನ್ನು ಯಾವತ್ತೂ ನೆನಪಿಸಬೇಡ ಹಣೆಬರಹದಲ್ಲಿ ಏನು ಬರೆದಿದೆಯೋ ಅದು ಆಗಲೇಬೇಕು ನಿನ್ನೆಯ ನೋವು ನೆನಪು ಮಾಡಿದ್ರೆ ಇಂದಿನ ಅಮೂಲ್ಯ ವಾದ ದಿನದ ನಗು ಹಾಳು ಮಾಡುತ್ತೆ
_________________________________________

ಯಾರೂ ಶ್ರೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಶಿಷ್ಟ್ಯಗಳಿವೆ. ಯಾರನ್ನೂ ಯಾರಿಗೂ ಹೋಲಿಸದೆ ಎಲ್ಲರನ್ನೂ ಗೌರವಿಸೋಣ.
ಶುಭ ಮುಂಜಾನೆ
_________________________________________

ಬದುಕು ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ...
ಬಸಿದು ಹೋಗುವ ಮುನ್ನ ಬಳಸಬೇಕು ಪ್ರತಿಕ್ಷಣ ವ್ಯರ್ಥವಾಗದಂತೆ...
ಪ್ರಯತ್ನ ಎಂಬುದು ಬೀಜದ ಹಾಗೆ......!
ಬಿತ್ತುತ್ತಲೇ ಇರಿ.. ಚಿಗುರಿದರೆ ಮರವಾಗಲಿ...!
ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಶುಭ ಮುಂಜಾನೆಯೊಂದಿಗೆ ಶುಭ ದಿನ ಪ್ರಾರಂಭವಾಗಲಿ
_________________________________________

ಸಕ್ಕರೆ ಸಹವಾಸ ಮಾಡಿದ ಹಾಲು ಸಿಹಿಯಾಗುತ್ತದೆ.
ಹುಳಿಯ ಸಹವಾಸ ಮಾಡಿದ ಹಾಲು ಒಡೆದು ಹೋಗುತ್ತದೆ.
ಅದೇ ರೀತಿ ಬದುಕು ಒಳ್ಳೆಯವರ ಸಹವಾಸ ಮಾಡಿದರೆ ಜೀವನ ಸುಖಮಯವಾಗುತ್ತದೆ.
ಕೆಟ್ಟವರ ಸಹವಾಸ ಮಾಡಿದರೆ ಜೀವನ ಒಡೆದು ಹೋಗುತ್ತದೆ.
_________________________________________

ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನಷ್ಟೇ ಖರ್ಚು
ಮಾಡುತ್ತಾನೆ.
ಆದರೆ ಹೃದಯದಿಂದ ಪ್ರೀತಿಸುವವವ ತನ್ನ ಸರ್ವಸ್ವವನ್ನೂ ಅರ್ಪಿಸುತ್ತಾನೆ.
ಶುಭ ದಿನ ಶುಭ ಮುಂಜಾನೆ
_________________________________________

ಕಂಡು ಕಾಣದಂತೆ ಹೋದವರ
ಮುಂದೆ ಕತ್ತೆತ್ತಿ ನಡೆಯಬೇಕು
ಮುಖತಿರುಗಿಸಿ ಹೋದವರ ಮುಂದೆ
ಮಂದಹಾಸದಿ ಮೆರೆಯಬೇಕು
ಸ್ವಾಭಿಮಾನ ಯಾರಪ್ಪನ ಮನೆ ಸ್ವತ್ತು ಅಲ್ಲ
ಶುಭ ದಿನ ಶುಭ ಮುಂಜಾನೆ
_________________________________________

ಸದಾ ನಿನ್ನ ಮನಸ್ಸು ಶಕ್ತಿಪೂರ್ಣವಾಗಿರುವಂತೆ ನೋಡಿಕೋ.
ನಿನ್ನ ಮಾತುಗಳಲ್ಲಿಯೂ ಸದಾ ಶಕ್ತಿಯೇ ಚಿಮ್ಮುತಿರಲಿ.
"ನಾನು ದುರ್ಬಲ, ನನ್ನ ಕೈಲೇನಾದೀತು" ಎಂದು ಹೇಳಿಕೊಳ್ಳುತ್ತಲೇ ಇದ್ದರೆ ಮನುಷ್ಯ ಕೈಲಾಗದವನೇ ಆಗುತ್ತಾನೆ.
ಕಸಕ್ಕಿಂತ ಕಡೆಯಗುತ್ತಾನೆ...
ಶುಭ ದಿನ ಶುಭ ಮುಂಜಾನೆ
_________________________________________

ಪ್ರತಿಯೊಬ್ಬರಿಗೂ ಅವರವರ ವೈಯಕ್ತಿಕ ಜೀವನದಲ್ಲಿ ಅವರದೆ ಆದಂತಹ.....
ನೋವು , ಕಷ್ಟಗಳಿರುತ್ತವೆ.....
ಯಾರ ಬಗ್ಗೆಯೂ ತಿಳಿಯದೆ ಮತ್ತೊಬ್ಬರ ಬಳಿ ಹೀಯಾಳಿಸಿ ಮಾತನಾಡುವುದು.....
ಮಾತಾನಾಡುವವರ ಯೋಗ್ಯತೆಯನ್ನು ತೋರ್ಪಡಿಸುತ್ತದೆ........
ಶುಭೋದಯ......
ಶುಭ ಮುಂಜಾನೆ
_________________________________________

ನಿಮ್ಮ ಮನಸ್ಸು ನೋವಿನಿಂದ ಕೂಡಿದಾಗ, ನಿಮ್ಮ ಮುಖದಲ್ಲಿ ಸದಾ ನಗುವನ್ನು ಬಯಸುವ ವ್ಯಕ್ತಿಗಳೊಡನೆ ಸಮಯ ಕಳೆಯಿರಿ..
ಯಾಕೆಂದರೆ ಅವರು ಎಂದಿಗೂ ಉರಿಯುವ ಬೆಂಕಿಗೆ ತುಪ್ಪ ಸುರಿಯವುದಿಲ್ಲ....
ಶುಭೋದಯ
_________________________________________

ಅಹಂಕಾರಕ್ಕೆ ಉದಾಸಿನವೇ ಮದ್ದು
ಉದಾಸಿನಕ್ಕೆ ಉತ್ಪ್ರೇಕ್ಷೆಯೇ ಮದ್ದು
ನೋಡಿಯು ನೋಡದಂತೆ ಹೋಗುವವರು
ಹೋದರೆ ಹೋಗಲಿ ನಾವಂತೂ ಕಲ್ಲು
ಬಂಡೆಯಂತೆಯೇ ಸ್ಥಿರ.
ಯಾಕಂದ್ರೆ ನಮಗೊಂದು ಗಟ್ಟಿತನವಿದೆ.
ಗಾಳಿಗೆ ಗಿಡ ಮರಗಳು ಅಲ್ಲಾಡುವುವೇ
ಹೊರತು ಬೆಟ್ಟ ಗುಡ್ಡಗಳಲ್ಲವೇ ಅಲ್ಲ.??
ಶುಭೋದಯ
_________________________________________

ಸೋಲಿನಹೊಡೆತವನ್ನು ತಾಳಿಕೊಂಡು ನೀವು ಹೇಗೆ ಪುಟಿದು ನಿಲ್ಲುವಿರಿ ಎಂಬುದರ ಮೇಲೆ ನಿಮ್ಮ ಯಶಸ್ಸು ನಿಂತಿದೆ
ಶುಭ ದಿನ ಶುಭ ಮುಂಜಾನೆ
_________________________________________

ನಾವು ಮಾಡುವ ಸಣ್ಣ ಸಣ್ಣ ಪ್ರಯತ್ನಗಳುಜೀವನದಲ್ಲಿ ದೊಡ್ಡ ಪರಿವರ್ತನೆ ತರಲು ಸಕ್ಷಮವಾಗಿವೆ. ಪ್ರಯತ್ನ ಸಣ್ಣದಾದರು ಪರವಾಗಿಲ್ಲ ಆದರೆ ಆ ಪ್ರಯತ್ನ ನಿಲ್ಲಬಾರದು ಅಷ್ಟೇ.
ಶುಭ ದಿನ ಶುಭ ಮುಂಜಾನೆ
_________________________________________

ನಾವು ಮಾಡುವ ಸಣ್ಣ ಸಣ್ಣ ಪ್ರಯತ್ನಗಳುಜೀವನದಲ್ಲಿ ದೊಡ್ಡ ಪರಿವರ್ತನೆ ತರಲು ಸಕ್ಷಮವಾಗಿವೆ. ಪ್ರಯತ್ನ ಸಣ್ಣದಾದರು ಪರವಾಗಿಲ್ಲ ಆದರೆ ಆ ಪ್ರಯತ್ನ ನಿಲ್ಲಬಾರದು ಅಷ್ಟೇ.
ಶುಭ ದಿನ ಶುಭ ಮುಂಜಾನೆ
_________________________________________

ಕನಸು ಕಾಣುವುದನ್ನು ಬಿಟ್ಟಾಗ ಬದುಕು ಸಾಯುತ್ತದೆ.
ನಂಬುವುದನ್ನು ಬಿಟ್ಟಾಗ ಭರವಸೆಗಳು ಸಾಯುತ್ತವೆ.
ಕಾಳಜಿ ವಹಿಸುವುದನ್ನು ಬಿಟ್ಟಾಗ ಪ್ರೀತಿ ಸಾಯುತ್ತದೆ.
ಕನಸು, ನಂಬಿಕೆ ಹಾಗೂ ಕಾಳಜಿ ಗಳು ಬದುಕಿನಲ್ಲಿ ಅರ್ಥಪೂರ್ಣ ಪಾತ್ರ ವಹಿಸುತ್ತವೆ.
ಶುಭೋದಯ
_________________________________________

ಕಷ್ಟ ಬಂದರೆ ಕಲ್ಲಿನಂತೆ ಗಟ್ಟಿಯಾಗಿರಬೇಕು..
ಸುಖ ಬಂದಾಗ ಹೂವಿನಂತೆ ಮೃದುವಾಗಿರಬೇಕು...
ಇಷ್ಟೇ ಜೀವನ..
ಶುಭ ದಿನ ಶುಭ ಮುಂಜಾನೆ
_________________________________________

ಬದುಕಿನಲ್ಲಿ ಕನ್ನಡಿ ಮತ್ತು ನೆರಳಿನಂಥ ಗೆಳೆಯರು ಬೇಕು..!
ಕನ್ನಡಿ ಯಾವತ್ತೂ ಸುಳ್ಳು ಹೇಳುವುದಿಲ್ಲ..
ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ..!
ಶುಭ ದಿನ ಶುಭ ಮುಂಜಾನೆ
_________________________________________

ಮಾತು ವೈರಿಗಳ ಮುಂದೆ
ಗತ್ತಿನಂತಿರಬೇಕು...
ಹೆದರಿಸುವವರ ಮುಂದೆ
ಕತ್ತಿಯಂತಿರಬೇಕು...
ಆತ್ಮೀಯರ ಮುಂದೆ
ಮುತ್ತಿನಂತಿರಬೇಕು...
ಹಿರಿಯರ ಮುಂದೆ
ಹತ್ತಿಯಂತಿರಬೇಕು....
ಶುಭ ದಿನ ಶುಭ ಮುಂಜಾನೆ
_________________________________________

ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ ಮನಸ್ಸು ಮೆಲ್ಲನೆ ನುಡಿಯಿತು, ಬರೀ ಬೂದಿಯಾಗಲೂ ಮನುಷ್ಯ ಜೀವನಪೂತಿ೯ ಬೇರೆಯವರನ್ನು ನೋಡಿ ಉರಿಯುತ್ತಾನೆ ಎಂದು....
ಶುಭ ದಿನ ಶುಭ ಮುಂಜಾನೆ
_________________________________________

ಮುಂದೆ ಬರಬಹುದಾದ ದುಃಖ ಇಂದಿನ ಸುಖವನ್ನು ನಾಶಮಾಡುತ್ತದೆ.
ಆದರೆ ಮುಂದೆ ಬರಬಹುದಾದ ಸುಖ ಇಂದಿನ ದುಃಖವನ್ನು ನಾಶಮಾಡುವುದಿಲ್ಲ.
ಶುಭ ದಿನ ಶುಭ ಮುಂಜಾನೆ
_________________________________________

ಮರಣ ಹೊಂದಿದ ನಂತರ ಶವದ ಮೇಲೆ ಬಿದ್ದು ಬಿದ್ದು ಅಳುವ ಸಂಬಂಧಗಳಿಗಿಂತ ಬದುಕಿರುವಾಗ ಜೀವನದಲ್ಲಿ ಕೆಳಗಡೆ ಬೀಳದಂತೆ ಜೊತೆಯಾಗಿ ನಿಲ್ಲುವ ಸಂಬಂಧಗಳೆ ನಿಜವಾದ ಸಂಬಂಧಗಳು
ಶುಭ ದಿನ ಶುಭ ಮುಂಜಾನೆ
_________________________________________

ಜನ ಮಾತಾನಾಡುತ್ತಾರೆ ಅಂತ ನಾವು ಬದುಕೋಕೆ ಆಗಲ್ಲ ಯಾಕೆಂದರೆ ನಮ್ಮ ಜೀವನ ನಮ್ಮ ಇಷ್ಟ
ಜನ ಕೆಟ್ಟರೂ ಮಾತಾನಾಡುತ್ತಾರೆ , ಚೆನ್ನಾಗಿದ್ರು ಮಾತಾನಾಡುತ್ತಾರೆ
ಅವರಿಗೆ ಬೇರೆಯವರ ಬಗ್ಗೆ ಮಾತಾಡೋದೇ ಕೆಲಸ.
ಶುಭ ದಿನ ಶುಭ ಮುಂಜಾನೆ
_________________________________________

ಹಣತೆ ಮಣ್ಣಿನದಾಗರಲಿ ಬಂಗಾರದ್ದಾಗಲಿ ಅದು ಮುಖ್ಯವಲ್ಲ ಕತ್ತಲಾಗದಾಗ ಅದು ಎಷ್ಟು ಬೆಳಗುತ್ತದೆ ಎಂಬುದು ಮುಖ್ಯ.
ಹಾಗೆಯೇ ಗೆಳೆಯ ಬಡವನಾಗಲಿ ಶ್ರೀಮಂತನಾಗಲಿ ಅದು ಮುಖ್ಯವಲ್ಲ ಕಷ್ಟದ ಸಮಯದಲ್ಲಿ ಅವರು ನಮಗೆಷ್ಟು ಜೊತೆಯಾಗುತ್ತಾರೆ ಎಂಬುದು ಮುಖ್ಯ ....
ಶುಭ ದಿನ ಶುಭ ಮುಂಜಾನೆ
_________________________________________

ನೀನು ಮಾಡಿದ ತಪ್ಪಿಗೆ ಬಿರುನುಡಿಯಬೇಡ,
ತಪ್ಪುಮಾಡದೆ ಎದುರಾಳಿಗೆ ತಲೆ ತಗ್ಗಿಸಬೇಡ
ಜ್ಞಾನಕ್ಕಾಗಿ ಯಾರನ್ನಾದರೂ ಬೇಡು,
ಅನ್ನಕ್ಕಾಗಿ ಒಬ್ಬರನ್ನೂ ಬೇಡ ಬೇಡ
ಶುಭ ದಿನ ಶುಭ ಮುಂಜಾನೆ
_________________________________________

ನಾಳೆಯ ಕ್ಷಣಕ್ಕೊಸ್ಕರ ಇಂದಿನ ಅಮೂಲ್ಯವಾದ ದಿನವನ್ನು ಹಾಳು ಮಾಡಿಕೊಳ್ಳಬೇಡಿ
ಇಂದು ನಮ್ಮದಾಗಿರಬಹುದು
ಆದರೆ
ನಾಳೆ ಇನ್ನ್ಯಾರದ್ದೊ ಆಗಬಹುದು.
ಶುಭ ದಿನ ಶುಭ ಮುಂಜಾನೆ
_________________________________________

"ಜೀವನದಲ್ಲಿ ನೀನು ಗೆದ್ದರೆ
ನೀನು ಯಾರು ಎಂದು ಗೊತ್ತಾಗುತ್ತದೆ,
ಜೀವನದಲ್ಲಿ ನೀನು ಸೋತರೆ
ನಿನ್ನವರು ಯಾರು ಎಂದು ಗೊತ್ತಾಗುತ್ತದೆ"
ಶುಭ ದಿನ ಶುಭ ಮುಂಜಾನೆ
_________________________________________

ಜೀವವನವೆಂದರೆ ತೀವ್ರ ಸಂಕಿರ್ಣವಾದದ್ದು.ಅದರಲ್ಲಿ ಬರುವ ಕೆಲವು ಪ್ತಶ್ನೆಗಳಿಗೆ ಉತ್ತರಗಳನ್ನು ಕಂಡುತೊಳ್ಳಲು ಹೋಗಲೇಬಾರದು.ಏಕೆಂದರೆ ಅವುಗಳಿಗೆ ಉತ್ತರಗಳನ್ನು ಹುಡುಕುವಷ್ಟರಲ್ಲಿ ಪ್ತಶ್ನೆಗಳೇ ಬದಲಾಗಿರುತ್ತವೆ.ಹೀಗಾಗಿ ಕೆಲವೊಂದು ಬಾರಿ ಜೀವನವನ್ಪು ಬಂದಂತೆ ಎದುರಿಸಬೇಕಾಗುತ್ತದೆ.
ಶುಭ ದಿನ ಶುಭ ಮುಂಜಾನೆ
_________________________________________

ಮಾತಿನಿಂದ ಮಾಡುವ ಗಾಯ ಕತ್ತಿಯ ಹೊಡೆತದ ಗಾಯಕ್ಕಿಂತಲು ತೀಷ್ಣವಾದದ್ದು ಆದುದರಿಂದ ಮಾತನಾಡುವಾಗ ಯೋಚಿಸಿ ಮಾತನಾಡಬೇಕು.. !!
ಶುಭ ದಿನ ಶುಭ ಮುಂಜಾನೆ
_________________________________________

ಒಂದು ಹನಿ ಮೊಸರು ಸೇರಿದರೆ ಹೇಗೆ ಒಂದು ಹಾಲಿನ ಬಟ್ಟಲಿನ ಸಾವಿರ ಹನಿಗಳೂ ಕದಡಿಹೋಗುತ್ತವೆಯೋ ಹಾಗೆ ಸಾವಿರ ಸಕಾರಾತ್ಮಕ ಆಲೋಚನೆಗಳನ್ನೂ ಒಂದು ನಕಾರಾತ್ಮಕ ಯೋಚನೆ ಕದಡಿಬಿಡತ್ತದೆ, ಹಾಗಾಗಿ ನಕಾರಾತ್ಮಕತೆಯಿಂದ ಜಾಗ್ರತೆಯಾಗಿರಬೇಕು
ಶುಭ ದಿನ ಶುಭ ಮುಂಜಾನೆ
_________________________________________

ಭೂಮಿಗೆ ಬಿತ್ತುವ ಒಂದೇ ಒಂದು ಕಾಳು ಸಾಕು ಅದು ತೆನೆ ರೂಪದಲ್ಲಿ ಸಿಗುತ್ತದೆ, ಆಗಸದಿಂದ ಬೀಳುವ ಒಂದೊಂದೇ ಮಳೆ ಹನಿಗಳು ಸೇರಿ ನದಿಯಾಗಿ ಹರಿಯುತ್ತವೆ, ನಾವು ಮಾಡುವ , ಆಡುವ , ಯೋಚಿಸುವ ಒಳ್ಳೆ ಮತ್ತು ಕೆಟ್ಟ ಕೆಲಸಗಳ ಮೇಲೆ ನಮ್ಮ ಮುಂದಿನ ಜೀವನ ನಿರ್ಧಾರವಾಗಿರುತ್ತದೆ !!!
ಶುಭ ದಿನ ಶುಭ ಮುಂಜಾನೆ
_________________________________________

ಬಯಸಿದ್ದೆಲ್ಲಾ ಸಿಗುವಂತಿದರೆ ಬಯೆಕೆಗೆ ಬೆಲೆ ಇರುತ್ತಿರಲ್ಲ.ಅನಿಸಿದ್ದೆಲ್ಲಾ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ.ತಪ್ಪುಗಳೆ ಆಗದಿದ್ದರೆ ಹೊಸ ಪ್ರೆಯೆತ್ನ ಪಡುತ್ತಿರಲಿಲ್ಲ.ಕಣ್ಣೀರೆ ಬರದಿದ್ದರೆ ನಗುವಿನ ಆನಂದ ತಿಳಿಯುತ್ತಿರಲಿಲ್ಲ.
ಶುಭ ದಿನ ಶುಭ ಮುಂಜಾನೆ
_________________________________________

ಕಡಲಲ್ಲಿ ಸಾವಿರ ಮುತ್ತುಗಳು ಸಿಗಬಹುದು ಆದರೆ ಜೀವನದಲ್ಲಿ ಸಿಗುವುದು ಎರಡೆ ಮುತ್ತುಗಳು ಅದುವೆ ಪ್ರೀತಿ ಮತ್ತು ಸ್ನೇಹ ಇದರಲ್ಲಿ ಯಾವುದನ್ನೆ ಕಳಕೊಂಡರು ಮನಸಿಗೆ ನೊವಾಗುತ್ತೆ ಅಲ್ವ
ಶುಭ ದಿನ ಶುಭ ಮುಂಜಾನೆ
_________________________________________

ಮಳೆಗೂ  ಮುನ್ನ ಕೆಲವೊಮ್ಮೆ ಮಾತ್ರ, ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ.ಸಂತೋಷವೂ ಹಾಗೆಯೇ, ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ.
ಶುಭ ದಿನ ಶುಭ ಮುಂಜಾನೆ
_________________________________________

ತಪ್ಪು ಮಾಡಬಾರದು. ಒಂದೊಮ್ಮೆ ತಪ್ಪು ಮಾಡಿದರೆ ಸಮರ್ಥಿಸಿಕೊಳ್ಳಲು ಪ್ರಯತ್ನಿಸಬಾರದು. ತಪ್ಪನ್ನು ಸಮರ್ಥಿಸಿಕೊಳ್ಳುವುದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಮಾಡದ ತಪ್ಪಿನಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ತಿದ್ದಿಕೊಳ್ಳುವುದು.  
ಶುಭೋದಯ
_________________________________________

ಪ್ರಯತ್ನ ಎಂಬುದು ಸಣ್ಣ ಪದವಾಗಿರಬಹುದು. ಆದರೆ ಅದು ತರುವ ಪರಿಣಾಮ ಮಾತ್ರ ಅಗಾಧ. ಎಂಥ ಸೋಲನ್ನಾದರೂ ಗೆಲ್ಲುವಂತೆ ಮಾಡುವ ಶಕ್ತಿ ಅದಕ್ಕಿದೆ. ಪ್ರಯತ್ನವೊಂದೇ ನಮ್ಮನ್ನು ಜೀವನ್ಮುಖಿಯಾಗಿಡುವುದು.  
ಶುಭೋದಯ
_________________________________________

ಒಬ್ಬನನ್ನು ಮೂರ್ಖನನ್ನಾಗಿಸಿದೆ ಎಂದು ಸಂತೋಷಿಸಬೇಡ ಏಕೆಂದರೆ ಅವನು ನಿನ್ನ ಮೇಲಿಟ್ಟ ನಂಬಿಕೆಯಿಂದ ಮೂರ್ಖನಾಗಿರುತ್ತಾನೆ, ಆದುದರಿಂದ ನಂಬಿಕೆ ಎನ್ನುವುದು ಬಹಳ ದೊಡ್ಡದು ಅದನ್ನು ಉಳಿಸಿಕೊಳ್ಳಬೇಕು.
ಶುಭೋದಯ
_________________________________________

ಒಬ್ಬನನ್ನು ಮೂರ್ಖನನ್ನಾಗಿಸಿದೆ ಎಂದು ಸಂತೋಷಿಸಬೇಡ ಏಕೆಂದರೆ ಅವನು ನಿನ್ನ ಮೇಲಿಟ್ಟ ನಂಬಿಕೆಯಿಂದ ಮೂರ್ಖನಾಗಿರುತ್ತಾನೆ, ಆದುದರಿಂದ ನಂಬಿಕೆ ಎನ್ನುವುದು ಬಹಳ ದೊಡ್ಡದು ಅದನ್ನು ಉಳಿಸಿಕೊಳ್ಳಬೇಕು.
ಶುಭೋದಯ
_________________________________________

ನಮ್ಮ ಜೀವನಕ್ಕಿಂತ ಬೇರೆಯವರ ಜೀವನ ಚೆನ್ನಾಗಿದೆ ಎಂದು ಯೋಚಿಸುತ್ತೇವೆ ಆದರೆ ನಾವು ಬೇರೆಯವರಿಗೆ
ಬೇರೆಯವರಾಗಿರುತ್ತೇವೆ ಎಂಬುದನ್ನು ಮರೆಯುತ್ತೇವೆ.
ಶುಭೋದಯ
_________________________________________

ಜೀವನದಲ್ಲಿ ಎರಡನೇ ಭಾರಿ ಅವಕಾಶ ಸಿಗಬಹುದು, ಆದರೆ ಇನ್ನೊಂದು ಜೀವನದ ಅವಕಾಶ ಸಿಗುವುದು ಕಷ್ಟ.
ಶುಭೋದಯ
_________________________________________

ಗುಣವಂತರ ಗುಣಗಳನ್ನು ಇನ್ನೂ ಅಧಿಕ ಗುಣಶಾಲಿಗಳ ನಡೆ ಮರೆಸುತ್ತದೆ. ದೀಪದ ಕುಡಿಯ ಬೆಳಕು ರಾತ್ರಿಯಲ್ಲಿರುವುವೇ ವಿನಾ ಸೂರ್ಯ ಹುಟ್ಟಿದಾಗ ಇರುವುದಿಲ್ಲ.
ಶುಭೋದಯ
_________________________________________

ಸಂತೋಷವಾಗಿದ್ದಾಗ ಯಾರಿಗೂ ವಾಗ್ದಾನ ಮಾಡಬಾರದು, ಕೋಪ ಬಂದಾಗ ಪ್ರತಿಕ್ರಯಿಸ ಬಾರದು, ದುಃಖದಲ್ಲಿದ್ದಾಗ ನಿರ್ಧಾರ ತೆಗೆದುಕೊಳ್ಳಬಾರದು.. !! 
ಶುಭ ದಿನ ಶುಭ ಮುಂಜಾನೆ
_________________________________________

ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ?
ಶುಭ ದಿನ ಶುಭ ಮುಂಜಾನೆ
_________________________________________

ಒಂದು ಕ್ಷಣದ ನಗುವಿನಿಂದ ಭಾವಚಿತ್ರ ಸುಂದರವಾಗಿ ಮೂಡಿ ಬರುತ್ತದೆ ಎಂದ ಮೇಲೆ ಪ್ರತಿಕ್ಷಣವೂ ನಗುತ್ತಿದ್ದರೆ ಜೀವನವೂ ಅಷ್ಟೆ ಸುಂದರವಾಗಿರುತ್ತದೆ..!!ಶುಭ ದಿನ ಶುಭ ಮುಂಜಾನೆ
_________________________________________

ಆಗಿ ಹೋಗಿರುವುದನ್ನು ಸರಿಪಡಿಸಲು ಪ್ರಯತ್ನಿಸಬೇಡ ಅದು ಅಸಾಧ್ಯ , ಮುಂದೆ ಮಾಡಬೇಕಾದುದನ್ನು ಸರಿಯಾದ ರೀತಿಯಲ್ಲಿ ಯೋಚಿಸಿ ಮಾಡು ಅದು ಸಾಧ್ಯ .. !!
ಶುಭ ಮುಂಜಾನೆ
_________________________________________

ಮಿತ್ರನನ್ನು ಪಡೆದುಕೊಳ್ಳುವುದು ಸುಲಭವಾಗಿರುತ್ತದೆ, ಹಾಗೆಯೇ ಅದೇ ಮಿತ್ರತ್ವವನ್ನು ಉಳಿಸಿಕೊಳ್ಳುವುದು ಮಾತ್ರ ಕಷ್ಟದಾಯಕ, ನಮ್ಮ ಮನಸ್ಸು ಚಂಚಲವಾಗಿರುವ ಕಾರಣ ಚಿಕ್ಕ ಚಿಕ್ಕ ಕಾರಣಗಳಿಗೂ ಸಹ ಸ್ನೇಹವು ಕೆಟ್ಟುಹೋಗುವ ಸಂಭವನೀಯತೆ ಜಾಸ್ತಿಯಾಗಿರುತ್ತದೆ.
_________________________________________

ನಮಗೆ ಬೇಕಾದದ್ದು ಸಿಕ್ಕದಿದ್ದರೆ ಸಿಕ್ಕಿದ್ದನ್ನು ಪ್ರೀತಿಸಬೇಕು.....ಪ್ರೀತಿ ಯಾವಾಗಲೂ ತೋರುವವರ ಔದಾರ್ಯವೇ ಹೊರತು ಪಡೆಯುವವರ ಯೋಗ್ಯತೆಯಲ್ಲ....
_________________________________________

ಜೀವನದಲ್ಲಿ ನೀನೊಬ್ಬನೇ ಏನಾದರೂ ಸಾಧಿಸಿ ಮೇಲೆ ಬರುವುದಕ್ಕಿಂತ ಹತ್ತು ಜನರನ್ನ ಮೇಲೆ ತಂದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ.
_________________________________________

ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!
_________________________________________

ಬದುಕಿನ ಒಂದು ವಿಚಿತ್ರ ನಿಯಮ.. ಪ್ರೀತಿಸುವುದೆಲ್ಲಾ ಸಿಗುವುದಾದರೆ ಕಣ್ ನೀರಿಗೆ ಬೆಲೆ ಎಲ್ಲಿದೆ..ಸಿಗುವುದೆಲ್ಲಾವನ್ನು ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ ಎಲ್ಲಿದೆ…
_________________________________________

ಜೀವನದಲ್ಲಿ ಎಲ್ಲರಿಗೂ ಗೆಲ್ಲಲೇಬೇಕೆಂಬ ಬಯಕೆ ಇರುತ್ತದೆ. ಆದರೆ ಬಯಸಿದಂತೆ ನಡೆಯುತ್ತದೆ ಎಂದೇನೂ ಇಲ್ಲ. ಬಯಸಿದ್ದು ಈಡೇರದೇ ಇದ್ದಾಗ ದು:ಖಿಸುವ ಅಗತ್ಯವಿಲ್ಲ. ಎಲ್ಲಿ ತಪ್ಪಿದೆವು ಎಂದು ಅವಲೋಕಿಸಿರಿ. ದಾರಿಯನ್ನು ಸರಿಪಡಿಸಿಕೊಂಡು ದಿಟ್ಟ ಗುರಿಯೊಂದಿಗೆ ಮುನ್ನಡೆಯಿರಿ. 
ಶುಭೋದಯ
_________________________________________

ಯಶಸ್ಸಿನ ಬೆನ್ನ ಹಿಂದೆಯೇ ಅತ್ಮವಿಶ್ವಾಸದಿಂದ ಜೀವಿಸುವದನ್ನು ರೂಢಿಸಿಕೊಳ್ಳಿರಿ. ಯಶಸ್ಸನ್ನು ಒಲಿಸಿಕೊಳ್ಳಿರಿ.  
ಶುಭೋದಯ
_________________________________________

ನನ್ನನ್ನು ಯಾರೂ ಇಷ್ಟಪಡುತ್ತಿಲ್ಲ ಎಂಬ ಕೊರಗು ಬೇಡ. ಇದರ ಬದಲಿಗೆ ನನ್ನ ಹಾಗೆ ಯಾರೂ ಇಲ್ಲ ಎಂದು ಭಾವಿಸಿರಿ. ಎಲ್ಲ ವ್ಯಕ್ತಿಗಳೂ ವಿಭಿನ್ನ ಎಂಬ ಸತ್ಯವನ್ನು ಮರೆಯದಿರಿ. ಯೋಚನೆ ವಿಭಿನ್ನವಾಗಿದ್ದಲ್ಲಿ ಜೀವನವು ಸುಂದರವಾಗುತ್ತದೆ.  
ಶುಭೋದಯ
_________________________________________

ದ್ವೇಷ, ಹೊಟ್ಟೆಕಿಚ್ಚು ಎಂದರೆ ನಾವು ವಿಷವನ್ನು ಸೇವಿಸಿ ಬೇರೆಯವರೇ ಸಾಯಲಿ ಎಂದು ಬಯಸಿದಂತೆ. ಆದರೆ ದ್ವೇಷಕ್ಕೆ ಬಲಿಯಾಗುವವರು ನಾವು. ದ್ವೇಷ ನಮ್ಮನ್ನು ಮೊದಲು ಸಾಯಿಸುತ್ತದೆ. ದ್ವೇಷದಿಂದ ಯಾವ ಪ್ರಯೋಜನವೂ ಇಲ್ಲ.
ಶುಭೋದಯ
_________________________________________

ಮಾತಿನ ಹಿಂದೆ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಮಾತು ಉತ್ತಮವಾಗಿ ಹೊರಡುತ್ತದೆ. ಮೊದಲು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಕಲಿಯಬೇಕು. 
ಶುಭೋದಯ
_________________________________________

ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನೂ ಒಂದು ಪಾಠವೆಂದು ಸ್ವೀಕರಿಸಿ. ಆಗ ಸಮಸ್ಯೆಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಪ್ರತಿ ಸಮಸ್ಯೆಯೂ ನಮಗೆ ಜೀವನ ಪಾಠವಾಗುತ್ತದೆ. ಶುಭೋದಯ
_________________________________________

ನೀವು ಎಷ್ಟೇ ಉನ್ನತ ಹುದ್ದೆಗೇರಿದರೂ ತಲೆಬಾಗುವುದನ್ನು ತಪ್ಪಿಸಿಬೇಡಿ ಒಲಂಪಿಕ್ಸ್‍ನಲ್ಲಿ ಮೊದಲಸ್ಥಾನ ಗಳಿಸಿದವರೂ ಪದಕ ಹಾಕಿಸಿಕೊಳ್ಳುವಾಗ ತಲೆ ಬಾಗುತ್ತಾರೆ. ತಗ್ಗಿ-ಬಗ್ಗಿ ನಡೆದರೆ ಎಂದೂ ಅಪಾಯವಿಲ್ಲ. 
ಶುಭೋದಯ
_________________________________________

ಆಕಳು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ.ಮರ ತನ್ನ ನೆರಳನ್ನು ತಾನು ಅನುಭವಿಸುವದಿಲ್ಲ.ಜೀವನವೆಂದರೆ ನಮಗಾಗಿ ಬದುಕುವುದಲ್ಲ,ಬೇರೆಯವರಿಗಾಗಿಯೂ ಬದುಕಬೇಕು.ಅದುವೇ ಜೀವನ
ಶುಭೋದಯ
_________________________________________

ಪ್ರಾಮಾಣಿಕರಾಗಿರಿ ಆದರೆ,ಅತಿ ಪ್ರಾಮಾಣಿಕರಾಗಬೇಡಿ.ಏಕೆಂದರೆ ನೇರವಾಗಿರುವ ಮರಗಳು ಮೊದಲು ನೆಲಕ್ಕುರುಳುತ್ತವೆ ಆನಂತರ ಡೊಂಕು ಮರದ ಸರದಿ...
ಶುಭೋದಯ
_________________________________________

ನಮ್ಮ ಜೀವನದ ಪಯಣದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕುವ ನಾವಿಕರು ನಾವು
ನಾವು ಉತ್ತರ ಹುಡುಕವಷ್ಟರಲ್ಲಿ ಮತ್ತೊಂದು ಪ್ರಶ್ನೆ ಎದುರು ಬಂದಿರುತ್ತದೆ ಪ್ರತಿ ದಿನ ನಮ್ಮನ್ನ ನಾವು ಹುಡುಕುವ ಪ್ರಯತ್ನವೇ ಜೀವನ
ಶುಭೋದಯ
_________________________________________

ಜಗತ್ತಿನ ಅನೇಕ ಸಮಸ್ಯಗಳಿಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ ಆದರೆ, ಜಗತ್ತು ಬೆಳೆಯುವುದು ಮಾತ್ರ ನಿಂತಿಲ್ಲ. ಏಕೆಂದರೆ ಕಾಡುವ ಶಕ್ತಿಗಿಂತ ಕಾಪಾಡುವ ಶಕ್ತಿ ಬಲಿಷ್ಠವಾಗಿದೆ. ಶುಭೋದಯ
_________________________________________

ಬದುಕೆಂಬುದು
ಕಷ್ಟ ಸುಖ
ನೋವು ನಲಿವು
ಸಮಸ್ಯೆಗಳ ಸಾಗರದಲ್ಲಿ
ಚಲಿಸುವ ದೋಣಿ.
ಬೇರಾರೂ ಚಲಾಯಿಸಿ
ದಡ ಸೇರಿಸುವರೆಂಬ
ಭ್ರಮೆ ಬೇಡ.
ನಿನ್ನ ದೋಣಿಗೆ
ನೀನೇ ನಾವಿಕ..!!
_________________________________________

ಪ್ರತಿಯೊಬ್ಬರಲ್ಲೂ ಒಬ್ಬ ಒಳ್ಳೆಯವನಿರುವಂತೆ ,
ಒಬ್ಬ ಕೆಟ್ಟವನು ಇದ್ದೇ ಇರ್ತಾನೆ.
ಆದರೆ ಬಹುತೇಕರಿಗೆ ಕೆಟ್ಟತನದ ಪ್ರದರ್ಶನದಷ್ಟು ಒಳ್ಳೆಯತನದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರೋಲ್ಲ.
ಶುಭೋದಯ
_________________________________________

ಹಣದ ಹಿಂದೆ ಹೋದರೆ ಒಂದು ದಿನದ ಸಂಪಾದನೆ. ಜನರ ಹಿಂದೆ ಹೋದರೆ ಜೀವನಪೂರ್ತಿ ಸಂಪಾದನೆ.
ಹೆಸರು ನೆಪ‌ ಮಾತ್ರ ಆಗಬಾರದು. ಹೆಸರೆ ಎಲ್ಲವನ್ನೂ ಹೇಳುವಂತಿರಬೇಕು.
ಶುಭೋದಯ
_________________________________________

ಮನಸ್ಸಲ್ಲಿ ಸಾವಿರ ನೋವಿದ್ದರೂ
ನಗುತ್ತಾ ಇರಬೇಕು
ಯಾಕೆಂದರೆ ನಮ್ಮ ನಗು ನೋಡಿ
ಖುಷಿ ಪಡೋರು ಇರ್ತಾರೆ
ಶುಭೋದಯ
_________________________________________

"ಹಲವರೇಳ್ತಾರೆ ತಿಂಡಿ ಬಿಸಿ ಇದ್ರೆ ಚೆಂದ
ಕೆಲವರೇಳ್ತಾರೆ ತಣ್ಗಾದ್ಮೇಲ್ ಚೆಂದ,
ಹಸಿದವರೇಳ್ತಾರೆ ಹಲಸಿದ್ದರೂ ಅದು ಪರಮಾನ್ನ!
ರುಚಿಗಿಂತ ಹಸಿವು ಮುಖ್ಯ..!"
ಶುಭೋದಯ
_________________________________________

ಯಾರ ಎದುರು ಮನಸ್ಪೂರ್ತೀಯಾಗಿ ನಗ್ತೀವೋ..... ಅವರ ಜೊತೆ ದಿನವಿಡೀ ಕಳೆಯಬಹುದು......
ಹಾಗೇಯೆ...
ಯಾರ ಎದುರು ಮನಸ್ಸು ಬಿಚ್ಚಿ ಅಳ್ತಿವೋ..... ಅವರ ಜೊತೆ ಜೀವನ ಪೂರ್ತಿ ಕಳೆಯಬಹುದು.......
ಶುಭೋದಯ
_________________________________________

" ನಾನು ಎಂಬುದು ಮರೆತು
ನನ್ನಿಂದಲೇ ಎಂಬುದು
ತೊರೆದು,
ನಾವು ಎಂಬುದು ನೆನೆದು
ನಮ್ಮಿಂದ ಎಂಬುದು
ಮನಸಿಟ್ಟು
ಎಲ್ಲರೊಳಗೊಂದಾಗಿ
ಬದುಕಿದರೆ ಅವನೇ ನಿಜವಾದ
ಸಾದಕ, ಅದುವೇ ಬದುಕಿನ
ಸಾಧನೆ.....!
ಶುಭಮುಂಜಾನೆ
_________________________________________

ನಿಮಗೆ ಶತ್ರುಗಳು ಹುಟ್ಟಬೇಕೆಂದರೆ ನೀವು ಅನ್ಯಾಯಮಾಡಬೇಕೆಂದಿಲ್ಲ,
ಕೆಲವೊಮ್ಮೆ ಜೀವನದಲ್ಲಿ ನೀವು ಸಾಧಿಸುವ ಯಶಸ್ಸುಗಳೇ ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡುತ್ತದೆ
ಶುಭ ದಿನ ಶುಭ ಮುಂಜಾನೆ
_________________________________________

ಇಚ್ಚಿಸಿದ್ದು ಸಿಗಲಿಲ್ಲ ಅಂದ್ರೆ
ಅದರ ಉಪಯೋಗ ಇಲ್ಲ ಅಂದುಕೊಂಡು ಸುಮ್ಮನೇ ಇರಬೇಕು
ಯಾಕೆಂದರೆ ...
ಅದನ್ನು ಪಡೆಯುವ ಆತುರದಲ್ಲಿ
ತುಂಬಾನೇ ಕಳೆದುಕೊಂಡು ಬಿಡ್ತೀವಿ
ಶುಭೋದಯ
_________________________________________

ತಾಳ್ಮೆ ಎಂಬುದು ವಜ್ರದ ಹಾಗೆ
ಅಪ್ಪಿತಪ್ಪಿ ಕಳೆದುಕೊಂಡರೂ
ಸಂಪಾದಿಸುವುದು ಬಹಳ ಕಷ್ಟ
ನಾವು ಆದಷ್ಟು
ತಾಳ್ಮೆಯಿಂದಿರೋಣ, ಆಗ
ಜನರಿಗೆ ನಮ್ಮ ಮೇಲಿನ
ನಂಬಿಕೆ ವಜ್ರದಷ್ಟು
ಧೃಡವಾಗುವುದರಲ್ಲಿ
ಅನುಮಾನವೇ ಇಲ್ಲ......
ಶುಭೋದಯ
_________________________________________

ಬರೆದಿಟ್ಟಂತೆ ಜೀವನ ಯಾರಿಗೂ ಮಾಡಲಿಕ್ಕಾಗದು..
ಆದರೆ,
ಮಾಡಿರುವ ಜೀವನವನ್ನು ಯಾರಾದರೂ ಬರೆದಿಡಬಹುದಾಗಿದೆ...
ಬರೆಯುವಂತೆ ಬದುಕಿ.
ಶುಭೋದಯ
_________________________________________

ಹಣತೆ ಮಣ್ಣಿನದಾಗರಲಿ ಬಂಗಾರದ್ದಾಗಲಿ ಅದು ಮುಖ್ಯವಲ್ಲ ಕತ್ತಲಾಗದಾಗ ಅದು ಎಷ್ಟು ಬೆಳಗುತ್ತದೆ ಎಂಬುದು ಮುಖ್ಯ
ಹಾಗೆಯೇ ಗೆಳೆಯ ಬಡವನಾಗಲಿ ಶ್ರೀಮಂತನಾಗಲಿ ಅದು ಮುಖ್ಯವಲ್ಲ ಕಷ್ಟದ ಸಮಯದಲ್ಲಿ ಅವರು ನಮಗೆಷ್ಟು ಜೊತೆಯಾಗುತ್ತಾರೆ ಎಂಬುದು ಮುಖ್ಯ ....
ಶುಭೋದಯ
_________________________________________

ಮುತ್ತಿನಂಥ ಮಾತು
ಬರಿ ಹಣ ಇರುವವನು ಆಳಿಗೆ ಮಾತ್ರ ಯಜಮಾನ...ಆದರೆ ಗುಣ ಇರುವವನು ಮನುಷ್ಯ ಕುಲಕ್ಕೆ ಯಜಮಾನ
ಶುಭೊದಯ ಶುಭ ದಿನ
_________________________________________

ಕನಸು ಕಾಣುವುದನ್ನು ಬಿಟ್ಟಾಗ ಬದುಕು ಸಾಯುತ್ತದೆ.
ನಂಬುವುದನ್ನು ಬಿಟ್ಟಾಗ ಭರವಸೆಗಳು ಸಾಯುತ್ತವೆ.
ಕಾಳಜಿ ವಹಿಸುವುದನ್ನು ಬಿಟ್ಟಾಗ ಪ್ರೀತಿ ಸಾಯುತ್ತದೆ.
ಕನಸು, ನಂಬಿಕೆ ಹಾಗೂ ಕಾಳಜಿ ಗಳು ಬದುಕಿನಲ್ಲಿ ಅರ್ಥಪೂರ್ಣ ಪಾತ್ರ ವಹಿಸುತ್ತವೆ.
ಶುಭೋದಯ
_________________________________________

ಸದಾ ನಿನ್ನ ಮನಸ್ಸು ಶಕ್ತಿಪೂರ್ಣವಾಗಿರುವಂತೆ ನೋಡಿಕೋ.
ನಿನ್ನ ಮಾತುಗಳಲ್ಲಿಯೂ ಸದಾ ಶಕ್ತಿಯೇ ಚಿಮ್ಮುತಿರಲಿ.
"ನಾನು ದುರ್ಬಲ, ನನ್ನ ಕೈಲೇನಾದೀತು" ಎಂದು ಹೇಳಿಕೊಳ್ಳುತ್ತಲೇ ಇದ್ದರೆ ಮನುಷ್ಯ ಕೈಲಾಗದವನೇ ಆಗುತ್ತಾನೆ.
ಕಸಕ್ಕಿಂತ ಕಡೆಯಗುತ್ತಾನೆ... ಶುಭೋದಯ
_________________________________________

ನಿಮ್ಮ ಮನಸ್ಸು ನೋವಿನಿಂದ ಕೂಡಿದಾಗ, ನಿಮ್ಮ ಮುಖದಲ್ಲಿ ಸದಾ ನಗುವನ್ನು ಬಯಸುವ ವ್ಯಕ್ತಿಗಳೊಡನೆ ಸಮಯ ಕಳೆಯಿರಿ..
ಯಾಕೆಂದರೆ ಅವರು ಎಂದಿಗೂ ಉರಿಯುವ ಬೆಂಕಿಗೆ ತುಪ್ಪ ಸುರಿಯವುದಿಲ್ಲ....
ಶುಭೋದಯ
_________________________________________

ಜನ ಮಾತಾನಾಡುತ್ತಾರೆ ಅಂತ ನಾವು ಬದುಕೋಕೆ ಆಗಲ್ಲ ಯಾಕೆಂದರೆ ನಮ್ಮ ಜೀವನ ನಮ್ಮ ಇಷ್ಟ
ಜನ ಕೆಟ್ಟರೂ ಮಾತಾನಾಡುತ್ತಾರೆ , ಚೆನ್ನಾಗಿದ್ರು ಮಾತಾನಾಡುತ್ತಾರೆ
ಅವರಿಗೆ ಬೇರೆಯವರ ಬಗ್ಗೆ ಮಾತಾಡೋದೇ ಕೆಲಸ.
ಶುಭೋದಯ
_________________________________________

ನಡೆಯುವಾಗ ಎಡವುವುದು ಸಹಜ. ಆದರೆ ಎಡವಿದ ಕಲ್ಲಿಗೆ ಮತ್ತೆ ಮತ್ತೆ ಎಡವುವುದು ದಡ್ಡತನ
ಶುಭೋದಯ

Leave a reply

Latest Posts

10 Best Malayalam Movies You Must Watch in 2024

10 Best Malayalam Movies You Must Watch in 2024

The Malayalam film industry is renowned for producing inventive and varied films, and 2024 is already looking to be no different. With so many different films slated for release—from high-profile blockbusters to indie productions—there's something for everyone to enjoy. Here we have listed the 10 best Malayalam movies that give you goosebumps and make you cry. Most of the Malayalam movies are written based on true stories and events.

Trend: Exevor launched new tool for domain availability check

Trend: Exevor launched new tool for domain availability check

We launched a tool for search domain name for check availability. This tool is little bit straight and quick.

Kiwifruit

Kiwifruit

Kiwifruit, also known simply as kiwi, is a small, fuzzy fruit with a brown, hairy skin and bright green flesh. It is known for its unique, sweet-tart flavor and vibrant green color. The scientific name for the most common variety is Actinidia deliciosa. Kiwifruit is native to China and was originally called Chinese gooseberry, but it was later renamed kiwifruit or kiwi in reference to the New Zealand national bird, the kiwi, which has a similar brown, fuzzy exterior.

Golden Temple Kushalnagar, Coorg's

Golden Temple Kushalnagar, Coorg's

The Golden Temple in Kushalnagar, Coorg, is officially known as the Namdroling Monastery. It is a significant Tibetan Buddhist monastery and is one of the largest teaching centers of the Nyingma lineage of Tibetan Buddhism outside Tibet.